ಕೂಸು ಎಲ್ಲಿ ಹೋಯಿತೇ

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ
ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ

ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು
ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು
ಮಳೆಯ ಜೊಲ್ಲು ಸುರಿಸಿ ಅಂಗ ತೋಯಿಸಿದ್ದನು
ನನ್ನ ಎದೆಯ ನೆಲವ ಕೂಡ ಮೀಯಿಸಿದ್ದನು

ಬಸ್ಸು ಲಾರಿ ಸದ್ದು ಕೇಳಿ  ಭಯವ ತಾಳಿ
ಬಂದು ನನ್ನ ಮಡಿಲಿನಲ್ಲಿ ಅಡಗುತಿದ್ದನು
ನಿನ್ನೆ ಮೊನ್ನೆ ನಡೆಯುವುದನು ಕಲಿಯುತಿದ್ದನು

ಕೈಯ ಚಾಚಿ ಚಿಕ್ಕೆಗಳನು ಹೊಕ್ಕು ನೋಡಿ ಬರುವೆನೆಂಬ
ಉದಯ ಸೂರ್ಯನನ್ನು ತಿಂಬ ಹಣ್ಣೆ ಎಂಬನು
ಹೊಟ್ಟೆಗೆಷ್ಟು ಕೊಟ್ಟರೇನು ಮಣ್ಣ ತಿಂಬನು

ಅವನ ಕಣ್ಣು ಕೋಪದಲ್ಲಿ ಸೂರ್ಯಾಸ್ತದ ಕೆಂಪನುಗುಳಿ
ನನ್ನ ಕಣ್ಣ ಸರಸಿನಲ್ಲಿ ಬಿಂಬಿಸಿದ್ದಿತು
ಮುದ್ದು ಬಾರೊ ಎನಲು ಎನ್ನ ಚುಂಬಿಸಿದ್ದಿತು

ನಾನು ಹೊರಗೆ ಹೋಗುವಾಗ ಹೋಗಬೇಡವೆಂದು ತೊಡರಿ
ಜಗದ ಜೀವಿ ನಾನು ಹೋಗೆ ಅಳುತಲಿದ್ದಿತು
ಎತ್ತ ಹೋದರಿತ್ತ ಮನಸು ಸೆಳೆಯುತಿದ್ದಿತು

ತನ್ನ ಬಾಯಿ ಮಣ್ಣಿನಲ್ಲಿ ಸೃಷ್ಟಿಯನ್ನೆ ತುಂಬಿಸಿತ್ತು
ತನ್ನ ಹಣೆಯ ಮುಂಗುರಳಲಿ ನನ್ನ ಸುತ್ತಿತು
ನನ್ನ ಕರುಳ ಕುಡಿಯು ನಗಲು ಅಳುವೆ ಸತ್ತಿತು

ನನ್ನ ಮನದ ದಿವ್ಯಮೂರ್ತಿ ನನ್ನ ಜೀವ ಭಾವ ಕೀರ್ತಿ
ಎತ್ತ ಹೋಯಿತೇನೊ ಪಾಪ ತಿಳಿಯದಾಗಿದೆ
ಕರುಳುಕಿತ್ತು ಹೊರಗೆ ಬರುವ ದುಃಖವಾಗಿದೆ

ನೀನು ನೋಡಿದೇನೆ ಅಕ್ಕ ನಿನಗಾದರು ಗೊತ್ತೆ ತಂಗಿ
ಅಣ್ಣ-ತಮ್ಮ ನೀವಾದರು ಹೇಳಲಾರಿರಾ
ಮಗುವ ನಾನು ಕಾಂಬ ಪರಿಯ ತೋರಲಾರಿರಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವನಾಗುವೆಯೋ ? ಇಲ್ಲ…..
Next post ಲಿಂಗಮ್ಮನ ವಚನಗಳು – ೬೩

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys